ಪೋಸ್ಟ್‌ಗಳು

ಪುರಾಣಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ?

ಇಮೇಜ್
ಪುರಾಣಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ? ನಮ್ಮ ಪುರಾಣ ಕಥೆಗಳಲ್ಲಿ ಬರುವ ಅದೃಷ್ಯರಾದರು, ಪ್ರತ್ಯಕ್ಷರಾದರು, ಅಶರೀರವಾಣಿ ಕೇಳಿಸಿತು, ಶಾಪಕೊಟ್ಟರು , ಶಾಪದಿಂದ ಅಹಲ್ಯೆ ಕಲ್ಲಾದಳು, ಯಜ್ಞದಿಂದ ಮಳೆ ಭರಿಸಿದರು, ಕೋಪದಿಂದ ನೋಡಿದಾಗ ಭಸ್ಮವಾದರು, ತಪಸ್ವಿಗಳು ಆಡಿದ ಮಾತು ಅಥವಾ ಕೊಟ್ಟ ಶಾಪ ಎಂದಿಗೂ ಸುಳ್ಳಾಗಲಾರದು. ಎಂಬೆಲ್ಲಾ ಘಟನೆ ಗಳನ್ನು ನೊಡುತ್ತೇವೆ ಇದು ಸುಳ್ಳು ಎನ್ನುವಂತಿಲ್ಲ ಇಂದಿಗೂ ಸಾಧನೆ ಮಾಡಿದರೆ ಸಾಧಕರ ಮಾತಿನಂತೆಯೇ ಪ್ರಕೃತಿ ವರ್ತಿಸುವುದು ಸಾಧ್ಯವಿದೆ. ಇಂತಹ ಪ್ರಕೃತಿಯನ್ನು ದೈವಿಕ ಶಕ್ತಿಯನ್ನು ಒಲಿಸಿಕೊಳ್ಳುವ ರಹಸ್ಯವನ್ನು ಮಂತ್ರಗಳಲ್ಲಿ ಹುದುಗಿಸಿ ನಮ್ಮ ಹಿರಿಯರು ನಮಗೆ ನೀಡಿದ್ದಾರೆ. ಇಂತಹ ಮಂತ್ರಸಿದ್ದಿಯಿಂದ ನಾವುಕೂಡಾ ಅತೀಂದ್ರಯವಾದುದನ್ನು ಸಾಧಿಸಬಹುದಾಗಿದೆ. ಕುಳಿತಲ್ಲಿಂದಲೇ ವಿಶ್ವವನ್ನು ನೋಡಬಹುದಾಗಿದೆ. ನೆನೆಸಿದಲ್ಲಿ ಕ್ಷಣ ಮಾತ್ರದಲ್ಲಿ ನಾವು ಚ್ಚಿಸಿದ ಸ್ಥಳವನ್ನು ತಲುಪುವುದೂ ಸಾಧ್ಯವಿದೆ. ಹಿಂದೂಗಳಲ್ಲಿ ವಿಶೇಷ ವಿದ್ಯೆಗಳು ಭಾರತದಲ್ಲಿ ಕಲಿಸಲ್ಪಡುತ್ತಿದ್ದವು. ನಮ್ಮ ಪರಂಪರೆಯಲ್ಲಿ 64 ವಿದ್ಯೆಗಳಿವೆ. ಹಾಗೆಯೇ ಅಣಿಮಾ, ಲಘಿಮಾ, ಮಹಿಮಾ, ಗರಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶಿತ್ವ, ವಶಿತ್ವ ಎಂಬುದಾಗಿ ಅಷ್ಠ ಸಿದ್ದಿಗಳೂ ಕೂಡಾ ಉಲ್ಲೇಖಿಸಲ್ಪಟ್ಟಿದೆ. ಆದರೆ ಇಂದು ಸಾಧಕರ ಕೊರತೆ ಇದೆ ಮತ್ತು ವಿದ್ಯೆಯನ್ನು ದರುಪಯೋಗ ಪಡಿಸಿಕ...

ಹೋಮ ಮಾಡುವುದರಿಂದ ಯಾವೆಲ್ಲಾ ಆರೋಗ್ಯದ ಸಮಸ್ಯೆಗಳು ದೂರಾಗುತ್ತದೆ ನೋಡಿ

ಇಮೇಜ್
ಇದು ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಹೋಮ ಮಾಡುವುದರಿಂದ ಯಾವೆಲ್ಲಾ ಆರೋಗ್ಯದ ಸಮಸ್ಯೆಗಳು ದೂರಾಗುತ್ತದೆ ನೋಡಿ: ಹಿಂದೂ ಧರ್ಮದಲ್ಲಿ ಹೋಮ ಹವನಾದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಪ್ರತಿ ಶುಭ ಕಾರ್ಯಕ್ರಮಗಳಲ್ಲೂ ಹೋಮ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಹೋಮವನ್ನು ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ ಎಂದು ಹೇಳಲಾಗಿದೆ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಹೋಮ ಮಾಡುವುದರಿಂದ ಪರಿಸರವು ಕೂಡ ಶುದ್ಧಿಯಾಗುತ್ತದೆಯಂತೆ. ಹೋಮ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯು ಸಾಕಷ್ಟು ಪ್ರಯೋಜನಗಳನ್ನು ಪಡೆದಿದೆ. ಹೋಮ ಮಾಡುವುದರಿಂದಾಗುವ ಪ್ರಯೋಜನಗಳಾವುವು ಗೊತ್ತಾ..? ರೋಗದಿಂದ ಮುಕ್ತಗೊಳಿಸುತ್ತದೆ ಹೋಮ ಮಾಡುವುದರಿಂದ ಯಾವುದೇ ರೀತಿಯ ಮಾರಕ ಮತ್ತು ಅಪಾಯಕಾರಿ ರೋಗವನ್ನು ತೊಡೆದು ಹಾಕಬಹುದಾಗಿದೆ. ಹೋಮದ ಸಮಯದಲ್ಲಿ ಆ ಹೊಗೆಯನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ. ಹೋಮದ ಸಮಯದಲ್ಲಿ ಹೊಗೆ ದೇಹದೊಳಗೆ ಹೋಗಿ ಟೈಫಾಯ್ಡ್‌ನಂತಹ ತೀವ್ರ ಮತ್ತು ಮಾರಣಾಂತಿಕ ಕಾಯಿಲೆಯನ್ನು ತರುವ ಬ್ಯಾಕ್ಟೇರಿಯಾಗಳನ್ನು ತೆಗೆದು ಹಾಕುತ್ತದೆ. ಇದಲ್ಲದೇ ಸಂಪೂರ್ಣ ದೇಹವು ಶುದ್ಧವಾಗುತ್ತದೆ. ಆದರೆ ಮೆದುಳು, ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಯಿರುವವರು ಹೋಮದಿಂದ ದೂರವಿರಬೇಕು. ನಕಾರಾತ್ಮಕ ಶಕ್ತಿಯನ್ನು ನಾಶಪಡಿಸ...

ಶ್ರೀ ಗಣೇಶ ದ್ವಾದಶನಾಮ ಸ್ತೋತ್ರ

ಇಮೇಜ್
ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ | ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೆ || ೧ || ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ| ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಂ|| ೨ || ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ | ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಂ || ೩ || ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಂ| ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ|| ೪ || ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ | ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪ್ರಭೋ || ೫ || ವಿದ್ಯಾರ್ಥಿ ಲಭತೆ ವಿದ್ಯಾಂ ಧನಾರ್ಥೀ ಲಭತೆ ಧನಂ | ಪುತ್ರಾರ್ಥಿ ಲಭತೆ ಪುತ್ರಾನ್ ಮೋಕ್ಷಾರ್ಥಿ ಲಭತೆ ಗತಿಂ|| ೬ || ಜಪೇತ್ ಗಣಪತಿಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ | ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಂಶಯಃ || ೭ || ಅಷ್ಟೆಭ್ಯೊ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್ | ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ || ೮ ||

ಸಂಪೂರ್ಣ ರಾಮಾಯಣ ಪ್ರಶ್ನೋತ್ತರಗಳು

ಇಮೇಜ್
1) ರಾಮಾಯಣ ರಚಿಸಿದವರು ಯಾರು? ಉತ್ತರ: ವಾಲ್ಮೀಕಿ ಮಹರ್ಷಿಗಳು 2) ವಾಲ್ಮಿಕಿ ಯಾವ ವಂಶಜರು? ಉತ್ತರ: ಭೃಗುವಂಶ 3) ವಾಲ್ಮಿಕಿಯ ತಂದೆಯ ಹೆಸರೇನು? ಉತ್ತರ: ಪುಚೇತನ ಮಹರ್ಷಿಗಳು 4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು? ಉತ್ತರ: ಹುತ್ತ 5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು? ಉತ್ತರ: ೦೮ 6)ರಾಮಾಯಣದ ಕಾಂಡಗಳು ಯಾವುವು? ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ, 7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು? ಉತ್ತರ : ರಾಷ್ಟ್ರಕವಿ ಕುವೆಂಪು 8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ? ಉತ್ತರ : ಕಂಬನ್ 9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು? ಉತ್ತರ : ಯುದ್ದಕಾಂಡ 10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು? ಉತ್ತರ : ತ್ರೇತಾಯುಗ 11) ರಾಮನ ವಂಶ ಯಾವುದು ? ಉತ್ತರ : ಸೂರ್ಯವಂಶ 12) ಸೂರ್ಯವಂಶದ ಮೊದಲ ರಾಜನ ಹೆಸರು ? ಉತ್ತರ : ಇಕ್ಷ್ವಾಕು 13) ಇಕ್ಷ್ವಾಕುವಿನ ತಂದೆ ಯಾರು ? ಉತ್ತರ : ಸೂರ್ಯದೇವ 15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ? ಉತ್ತರ : ರಘುವಂಶ 16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ? ಉತ್ತರ : ಸತ್ಯ ಹರಿಶ್ಚಂದ್ರ 17) ದಶರಥನ ಮೂವರು ಪಟ್ಟ ಮಹಿಷಿಯರು ಯಾರು ? ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ 18) ದಶರಥ ಮಹಾರಜನ ತಂದೆ ಯಾರು ? ಉತ್ತರ : ಅಜ ಮಹಾರಾಜ 19) ಕೌಶಲ್ಯೆ...

ದೇವರ ಪೂಜೆಯಲ್ಲಿ ಪತ್ರೆಗಳ ಪಾತ್ರ

ಇಮೇಜ್
ಸಾಮಾನ್ಯವಾಗಿ ನಾವು ದೇವರ ಪೂಜೆಗೆ ಪತ್ರೆಗಳನ್ನು ಬಳಸುತ್ತೇವೆ. ಯಾವ ಪತ್ರೆಯಿಂದ ಪೂಜೆ ಮಾಡಿದರೆ ಶುಭ ದೊರಕುತ್ತದೆ ಎಂಬ ಬಗ್ಗೆ ಒಂದು ಅವಲೋಕನ ಇಲ್ಲಿದೆ. ದೇವರ ಕಾರ್ಯಗಳಿಗೆಲ್ಲ ವಿವಿಧ ಬಗೆಯ ಪತ್ರೆಗಳು ಬೇಕೇಬೇಕು. ಅದರಲ್ಲೂ ಒಬ್ಬೊಬ್ಬ ದೇವರಿಗೂ ಒಂದೊಂದು ಪತ್ರೆಯು ವಿಶೇಷ. ಈ ಪತ್ರೆಗಳು ಮತ್ತು ಅವುಗಳನ್ನರ್ಪಿಸಿ ಪೂಜಿಸಿದರೆ ಸಿಗುವ ವಿಶೇಷ ಫಲಾಫಲಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು. ಗರಿಕೆ ಪತ್ರೆ: ಗರಿಕೆ ಪತ್ರೆಯನ್ನು ಮೊದಲು ಪೂಜಿತನಾದ ಮಹಾಗಣಪತಿಗೆ ಸಲ್ಲಿಸುತ್ತಾರೆ. ಪ್ರತಿದಿನವೂ ಗರಿಕೆಯನ್ನು ಗಂಧದಲ್ಲಿ ಅದ್ದಿ ಪೂಜೆ ಮಾಡಿದರೆ ಸಕಲ ಇಷ್ಟ ಕಾರ್ಯಗಳು ನೆರವೇರುತ್ತವೆ. ಶನಿದೇವರಿಗೆ ಪಂಚಮಶನಿಕಾಟ, ಅಷ್ಟಮಶನಿಕಾಟ, ಏಳೂವರೆ ವರ್ಷದ ಶನಿಕಾಟವಿದ್ದವರು ಗರಿಕೆಯನ್ನು ಶನೇಶ್ವರನಿಗೆ ಅರ್ಪಿಸಿದರೆ ಆತನಿಂದ ಆಗುವ ಕಷ್ಟಗಳ ಬಲ ಕಡಿಮೆಯಾಗುತ್ತದೆ. ಆಂಜನೇಯ ಸ್ವಾಮಿಗೆ ಪ್ರತಿದಿನವೂ ಗರಿಕೆಯಿಂದ ಪೂಜೆ ಮಾಡಿದರೆ ಸಂಕಲ್ಪ ಮಾಡಿಕೊಂಡ ಕೆಲಸಗಳು ನೆರವೇರುತ್ತವೆ. ಮಹಾಗಣಪತಿಗೆ ಗರಿಕೆಯ ಹಾರವನ್ನು ಸಮರ್ಪಿಸಿದರೆ ಸಕಲ ಕಾರ್ಯದಲ್ಲಿ ಜಯ ಲಭಿಸಿ ಇಷ್ಟಾರ್ಥಸಿದ್ಧಿ ದೊರಕುತ್ತದೆ. ಪ್ರಾಣಿಗಳಿಗೆ ಸರಿಯಾಗಿ ಜೀರ್ಣವಾಗದೆ ಇದ್ದಾಗ ಗರಿಕೆಯನ್ನು ತಿಂದು ಆರೋಗ್ಯ ಸರಿಪಡಿಸಿಕೊಳ್ಳುತ್ತವೆ. ಹಾಗೆಯೇ ಮನುಷ್ಯನೂ ಗರಿಕೆಯ ರಸವನ್ನು ಕುಡಿದರೆ ಆರೋಗ್ಯ ಭಾಗ್ಯ ಲಭಿಸುತ್ತದೆ ಮರಗ ಪತ್ರೆ: ಯಾರಿಗೆ ಬಹಳ ವರ್ಷಗಳಾದರೂ ಅವರ ಕೋರಿಕೆ ನೆರವೇರುವುದಿಲ್ಲ, ಯ...

New Year Day , ಆಚರಣೆಗೆ ಬಂದದ್ದು ಹೇಗೆ ಎನ್ನುವುದು ನಾವು ಭಾರತೀಯರು ತಿಳಿಲೇಬೇಕಾದ ವಿಷಯ

ಇಮೇಜ್
ಜನೆವರಿ 1 new year day , ಆಚರಣೆಗೆ ಬಂದದ್ದು ಹೇಗೆ ಎನ್ನುವುದು ನಾವು ಭಾರತೀಯರು ತಿಳಿಲೇಬೇಕಾದ ವಿಷಯ ಇದು.  ತಪ್ಪದೆ ಓದಿ 1753ರಲ್ಲಿ England ನಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು , new year day ಜನ್ಮವನ್ನು ಜಾಲಾಡುತ್ತ ಹೋದರೆ ಆಶ್ಚರ್ಯಕಾರಿ ವಿಷಯಗಳು ಹೊರ ಹೊಮ್ಮುತ್ತವೆ.  ನಮ್ಮ ಧರ್ಮದಲ್ಲಿ ಕಾಲ ನಿರ್ಣಯವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯನ್ನಾಧರಿಸಿ , ತಿಥಿ , ವಾರ, ಮಾಸ, ಸಂವತ್ಸರ ಗಳನ್ನು ನಿಖರವಾಗಿ ಸಿದ್ದಗೊಳಿಸುವ ಪಂಚಾಗಕ್ಕೆ ಸಾವಿರಾರು ವರ್ಷಗಳ ಇತಿಹಾಸ ವಿದೆ.  ರೊಮ್ ಸಾಮ್ರಾಜ್ಯದ ಕಾಲ ನಿರ್ಣಯ ಪದ್ದತಿ ಹೆಗಿತ್ತು ?  ಒಂದು ವರ್ಷಕ್ಕೆ ಹತ್ತೆ ತಿಂಗಳೆಂದು ರೊಮನ್ನರು ನಂಬಿದ್ದರು. 'ಭಾರತಿಯ ಕಾಲಶಾಸ್ತ್ರ ನಿಣ೯ಯ ಪದ್ದತಿಯಿಂದ ಕಲಿತು ರೋಮನ್ನರು ರೊಮಕ್ಯಾಲೆಂಡರಗೆ ಜನೆವರಿ ಮತ್ತು ಫೆಬ್ರವರಿ ಎರಡು ತಿಂಗಳನ್ನು ಸೆರಿಸಿ 10 ನ್ನು12 ಕ್ಕೆ ಎರಿಸಿದರು.  ಜೂನ ತಿಂಗಳಲ್ಲಿ 29 ದಿವಸಗಳು ಮಾತ್ರ ಇದ್ದು ಅದನ್ನು 30 ಕ್ಕೆ ಏರಿಸಿದ , ನಂತರ ರೋಮ್ ದೋರೆ 'ಜೂಲಿಯಸ್ ಸೀಸರ್' ಆತನ ಹೆಸರಿನಲ್ಲಿಯೇ "ಜುಲೈ" ತಿಂಗಳನ್ನು ನಾಮಕರಣಗೊಳಿಸಿದ. ಆತನ ಉತ್ತರಾಧಿಕಾರಿ"ಆಗಸ್ಟನ್" ಆತನ ಹೆಸರಿನಲ್ಲಿ ಮುಂದಿನ ತಿಂಗಳನ್ನು 'ಆಗಸ್ಟ' ಎಂದು ಕರೆದ.  ಭಾರತಿಯ ಶಾಸ್ತ್ರದಿಂದ ರೋಮನ್ನರು ಅವರ ಮುಂದಿನ ತಿಂಗಳುಗಳನ್ನು ,  ಸೆಪ್ಟೆಂಬರ (ಸಂಸ್ಕೃತ - ಸಪ್ತ = 7 ನೇ + ಅಂಬರ = ತಿಂಗಳು...

ಹಿರಿಯರ ಅನುಭವದ ಕಿವಿ ಮಾತುಗಳು..

ಇಮೇಜ್
ನಾನೂ ಕೇಳಿದ್ದೇನೆ, ನೀವೂ ಕೇಳಿರಬಹುದು..  1) ಸೋಮವಾರ ತಲೆಗೆ ಎಣ್ಣೆ ಹಚ್ಚಬೇಡ.  2) ಒಂಟಿ ಕಾಲಲ್ಲಿ ನಿಲ್ಲಬೇಡ.  3) ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ.  4) ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ.  5) ಇಡೀ ಕುಂಬಳಕಾಯಿ ಮನೆಗೆ ತರಬೇಡ.  6) ಮನೆಯಲ್ಲಿ ಉಗುರು ಕತ್ತರಿಸಬೇಡ.  7) ಮಧ್ಯಾಹ್ನ  ತುಳಸಿ ಕೊಯ್ಯಬೇಡ.  8) ಹೊತ್ತು ಮುಳುಗಿದ ಮೇಲೆ ಗುಡಿಸಬೇಡ/ತಲೆ ಬಾಚಬೇಡ .  9) ಉಪ್ಪುಮೊಸರು ಸಾಲ ಕೊಡುವುದು ಬೇಡ.  10) ಬಿಸಿ ಅನ್ನಕ್ಕೆ ಮೊಸರು ಹಾಕಬೇಡ.  11) ಊಟ ಮಾಡುವಾಗ ಮದ್ಯೆ ಮೇಲೆ ಏಳಲೇಬೇಡ.  12) ತಲೆ ಕೂದಲು ಒಲೆಗೆ ಹಾಕಬೇಡ.  13) ಹೊಸಿಲನ್ನು ತುಳಿದು ದಾಟಬೇಡ.  14) ಮನೆಯಿಂದ ಹೊರಡುವಾಗ ಕಸ ಗುಡಿಸುವುದು ಬೇಡ.  15) ಗೋಡೆ ಮೇಲೆ ಕಾಲಿಟ್ಟು ಮಲಗಬೇಡ.  16) ರಾತ್ರಿ ಹೊತ್ತಲ್ಲಿ ಬಟ್ಟೆ ಒಗೆಯಬೇಡ.  17) ಒಡೆದ ಬಳೆ ಧರಿಸಬೇಡ. 18) ಮಲಗೆದ್ದ ಚಾಪೆ ಮಡಿಸದೆ ಬಿಡಬೇಡ.    19) ಉಗುರು ಕಚ್ಚಲು ಬೇಡ. 20) ಅಣ್ಣ, ತಮ್ಮ ತಂದೆ,ಮಗ ಒಟ್ಟಿಗೆ ಒಂದೇ ದಿನ ಚೌರ ಮಾಡಿಸಬಾರದು.  21) ಒಂಟಿ ಬಾಳೆಲೆ ತರಬೇಡ. 22) ಊಟ ಮಾಡಿದ ಮೇಲೆ ಕೈ ಒಣಗಿಸಬೇಡ.  23)ಮುಸ್ಸಂಜೆ ಹೊತ್ತಲ್ಲಿ ಮಲಗಬೇಡ.  24) ಕಾಲು ತೊಳೆಯುವಾಗ ಹಿಮ್ಮಡಿ ತೊಳೆಯುವುದು ಮರೆಯಬೇಡ.  2...